ಚಂದ್ರಶೇಖರ ವೆಂಕಟರಾಮನ್
ಭಾರತದ ಭೌತಶಾಸ್ತ್ರಜ್ಞ / From Wikipedia, the free encyclopedia
ಸರ್ ಸಿ.ವಿ.ರಾಮನ್ (Sir C.V.Raman) ಎಂದು ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ, ಚಂದ್ರಶೇಖರ ವೆಂಕಟರಾಮನ್ ರವರು ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ.[2] ಅಷ್ಟೇ ಏಕೆ, ಏಷ್ಯದಲ್ಲೇ ಮೊತ್ತಮೊದಲ ಬಾರಿಗೆ ನೊಬೆಲ್ ಪಾರಿತೋಷಿಕ ಪಡೆದ ಭಾರತೀಯ ವಿಜ್ಞಾನಿ.[3] ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು.[4]
Quick Facts ಸರ್ ಚಂದ್ರಶೇಖರ ವೆಂಕಟರಾಮನ್, ಸ್ಥಳೀಯ ಹೆಸರು ...
ಸರ್ ಚಂದ್ರಶೇಖರ ವೆಂಕಟರಾಮನ್ | |
---|---|
ಸ್ಥಳೀಯ ಹೆಸರು | 'ರಾಮನ್ |
ಜನನ | ೭ ನವೆಂಬರ್ ೧೮೮೮ ತಿರುವನ್ಕೊಯಿಲ್, ಟ್ರಿಚಿನೋಪೋಲಿ, ಮಡ್ರಾಸ್ ಪ್ರಾವಿನ್ಸ್, ಬ್ರಿಟಿಷ್ ಭಾರತ |
ಮರಣ | ೨೧ ನವೆಂಬರ್ ೧೯೭೦ ಬೆಂಗಳೂರು, ಕರ್ನಾಟಕ, ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | ಭಾರತೀಯ ಫೈನಾನ್ಸ್ ವಿಭಾಗ[1] ಕಲ್ಕತ್ತಾ ವಿಶ್ವವಿದ್ಯಾಲಯ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸೆಂಟ್ರಲ್ ಕಾಲೇಜು , ಬೆಂಗಳೂರು ವಿಶ್ವವಿದ್ಯಾಲಯ ರಮನ್ ರಿಸರ್ಚ್ ಇನ್ಸ್ಟಿಟ್ಯೂಟ್ |
ಅಭ್ಯಸಿಸಿದ ವಿದ್ಯಾಪೀಠ | ಮದ್ರಾಸ್ ವಿಶ್ವವಿದ್ಯಾಲಯ |
ಡಾಕ್ಟರೇಟ್ ವಿದ್ಯಾರ್ಥಿಗಳು | ಜಿ.ಎನ್.ರಾಮಚಂದ್ರನ್ ವಿಕ್ರಂ ಅಂಬಾಲಾಲ್ ಸಾರಾಭಾಯ್ |
ಪ್ರಸಿದ್ಧಿಗೆ ಕಾರಣ | ರಾಮನ್ ಪರಿಣಾಮ |
ಗಮನಾರ್ಹ ಪ್ರಶಸ್ತಿಗಳು | ನೈಟ್ ಬ್ಯಾಚುಲರ್ (೧೯೨೯) ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (೧೯೩೦) ಭಾರತ ರತ್ನ (೧೯೫೪) ಲೆನಿನ್ ಶಾಂತಿ ಪ್ರಶಸ್ತಿ(೧೯೫೭) |
ಸಂಗಾತಿ | ಲೋಕಸುಂದರಿ ಅಮ್ಮಾಳ್ (೧೯೦೭–೧೯೭೦) |
ಮಕ್ಕಳು | ಚಂದ್ರಶೇಖರ್ ಮತ್ತು ರಾಧಾಕೃಷ್ಣನ್, |
ಹಸ್ತಾಕ್ಷರ | |
ಜಾಲತಾಣ www |
Close