ಹರ್ಷನ್ ಆರ್. ನಾಯರ್
From Wikipedia, the free encyclopedia
ಅಶೋಕ ಚಕ್ರ ಸಮ್ಮಾನಿತ ಕ್ಯಾಪ್ಟನ್ ಹರ್ಷನ್ ರಾಧಾಕೃಷ್ಣನ್ ನಾಯರ್[2] (೧೫ ಏಪ್ರಿಲ್ ೧೯೮೦ - ೨೦ ಮಾರ್ಚ್ ೨೦೦೭) ಅವರು ಭಾರತೀಯ ಸೇನೆಯಲ್ಲಿ ಅಧಿಕಾರಿ. ಇವರು "ಪ್ರಿಡೇಟರ್ಸ್" ಎಂದು ಕರೆಯಲ್ಪಡುವ ಪ್ಯಾರಾ(ವಿಶೇಷ ಪಡೆಗಳು) ದಳದ ಇಲೈಟ ೨ನೇ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು . ಅವರಿಗೆ ೨೦೦೮ ರಲ್ಲಿ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.[3][4][5] ೨೦ ಮಾರ್ಚ್ ೨೦೦೭ರಂದು ಜಮ್ಮು ಕಾಶ್ಮೀರದ ಛೋಟಿ ಮಾರ್ಗಿ ಪ್ರದೇಶದಲ್ಲಿ ನಡೆದ ಹರ್ಕತುಲ್ ಮುಜಾಹಿದೀನ್ ಭಯೋತ್ಪಾದಕರ ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ತೊಡೆ ಮತ್ತು ಕುತ್ತಿಗೆಗೆ ಗುಂಡು ತಗುಲಿದ ಕಾರಣ ಅವರು ವೀರ ಮರಣವನ್ನು ಹೊಂದಿದರು.
Quick Facts ಕ್ಯಾಪ್ಟನ್ಹರ್ಷನ್ ಆರ್ ಅಶೋಕ ಚಕ್ರ, ಜನ್ಮನಾಮ ...
ಕ್ಯಾಪ್ಟನ್ ಹರ್ಷನ್ ಆರ್ ಅಶೋಕ ಚಕ್ರ | |
---|---|
ಜನ್ಮನಾಮ | ಹರ್ಷನ್ ರಾಧಾಕೃಷ್ಣನ್ ನಾಯರ್[1] |
ಜನನ | (೧೯೮೦-೦೪-೧೫)೧೫ ಏಪ್ರಿಲ್ ೧೯೮೦ ತಿರುವನಂತಪುರಂ, ಕೇರಳ, ಭಾರತ |
ಮರಣ | 20 March 2007(2007-03-20) (aged 26) ಜಮ್ಮು ಕಾಶ್ಮೀರ |
ವ್ಯಾಪ್ತಿಪ್ರದೇಶ | ಭಾರತ |
ಶಾಖೆ | ಭಾರತೀಯ ಸೇನೆ |
ಸೇವಾವಧಿ | ೨೦೦೨-೨00೭ |
ಶ್ರೇಣಿ(ದರ್ಜೆ) | ಕ್ಯಾಪ್ಟನ್ |
ಸೇವಾ ಸಂಖ್ಯೆ | IC-62541 |
ಘಟಕ | 2 Para (Special Forces) |
ಪ್ರಶಸ್ತಿ(ಗಳು) | ಅಶೋಕ ಚಕ್ರ |
Close