ಶೇಷಾದ್ರಿ ಅಯ್ಯರ್
ಮೈಸೂರಿನ ದಿವಾನರು / From Wikipedia, the free encyclopedia
ಸರ್ ಕೆ. ಶೇಷಾದ್ರಿ ಅಯ್ಯರ್ (ತಮಿಳು: குமரபுரம் சேஷாத்திரி ஐயர்) ಅವರು ೧೮೮೩ ರಿಂದ ೧೯೦೧ ರವರೆಗೆ ಮೈಸೂರು ದಿವಾನರಾಗಿ ಸೇವೆ ಸಲ್ಲಿಸಿ ಮೈಸೂರು ರಾಜ್ಯದಲ್ಲಿ ಅತಿಹೆಚ್ಚು ಸಮಯ ಅಧಿಕಾರದಲ್ಲಿದ್ದ ದಿವಾನರೆಂಬ ಹೆಸರಿಗೆ ಪಾತ್ರರಾಗಿದ್ದವರು. ೧೮೮೧ ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಕೈಯಿಂದ ಮರಳಿ ಒಡೆಯರ್ ಕುಟುಂಬದ ಪುನಃ ಸ್ಥಾಪನೆಯಾದ ನಂತರ ಮೈಸೂರು ರಾಜ್ಯದ ಎರಡನೆಯ ದಿವಾನರಾಗಿದ್ದರು.[1] ಅವರನ್ನು "ಆಧುನಿಕ ಬೆಂಗಳೂರಿನ ನಿರ್ಮಾಪಕ" ಎಂದು ಪರಿಗಣಿಸಲಾಗಿದೆ.ಇವರೊಬ್ಬ ಸಮರ್ಥ ವಕೀಲರಾಗಿದ್ದರು. 'ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ಸರಕಾರ' ಒಡೆಯರ್ ರಾಜಪರಿವಾರಕ್ಕೆ ತಾನು ಹಿಂದೆ ಕಸಿದುಕೊಂಡಿದ್ದ ರಾಜ್ಯದ ಎಲ್ಲಾ ಅಧಿಕಾರವನ್ನು ಮತ್ತೆ ಒಪ್ಪಿಸಿ ಆಗಿನ ರಾಜರನ್ನು ಸಿಂಹಾಸನವನ್ನೇರಲು ಆದೇಶ ನೀಡಿದ್ದು, ೧೮೮೧ ರಲ್ಲಿ. ಆ ಸಮಯದಲ್ಲಿ ನೇಮಿಸಲ್ಪಟ್ಟ ದಿವಾನರಲ್ಲಿ 'ಶೇಷಾದ್ರಿ ಅಯ್ಯರ್' ಎರಡನೆಯವರು. ಬೆಂಗಳೂರನ್ನು ಆಧುನಿಕರಣಮಾಡಲು ಪ್ರಯತ್ನಿಸಿ ಸಫಲರಾದ ಇವರನ್ನು "ಆಧುನಿಕ ಬೆಂಗಳೂರಿನ ನಿರ್ಮಾಪಕ" ಎಂದು ಪರಿಗಣಿಸಲಾಗಿದೆ
ಸರ್ ಕುಮಾರಪುರಂ ಶೇಷಾದ್ರಿ ಅಯ್ಯರ್ | |
---|---|
ಮೈಸೂರು ರಾಜ್ಯದ ದಿವಾನರು | |
ಅಧಿಕಾರ ಅವಧಿ ೧೨ ಫೆಬ್ರವರಿ ೧೮೮೩ – ೧೮ ಮಾರ್ಚ್ ೧೯೦೧ | |
Monarch | ಹತ್ತನೇ ಚಾಮರಾಜ ಒಡೆಯರು, ನಾಲ್ವಡಿ ಕೃಷ್ಣರಾಜ ಒಡೆಯರು |
ಪೂರ್ವಾಧಿಕಾರಿ | ಸಿ.ವಿ ರಂಗಾಚಾರ್ಲು |
ಉತ್ತರಾಧಿಕಾರಿ | ಟಿ.ಆರ್.ಎ. ತಂಬು ಚೆಟ್ಟಿ |
ವೈಯಕ್ತಿಕ ಮಾಹಿತಿ | |
ಜನನ | (೧೮೪೫-೦೬-೦೧)೧ ಜೂನ್ ೧೮೪೫ ಪಾಲ್ಘಾಟ್, ಕೇರಳ |
ಮರಣ | ೧೩ ಸೆಪ್ಟೆಂಬರ್ ೧೯೦೧ ( ೫೬ ವರ್ಷ) ಮೈಸೂರು |
ಸಂಗಾತಿ(ಗಳು) | ಧರ್ಮಸಮವರ್ಧಿನಿ (೧೮೬೫-೧೯೦೧) |
ಅಭ್ಯಸಿಸಿದ ವಿದ್ಯಾಪೀಠ | ಪ್ರಸಿಡೆನ್ಸಿ ಕಾಲೇಜು, ಮದರಾಸು |
ಉದ್ಯೋಗ | ಆಡಳಿತಜ್ಞ, ಸಾರ್ವಜನಿಕ ಸೇವೆ |