ರೊಮ್ಯಾಂಟಿಸಿಸಂ(ಭಾವಪ್ರಧಾನತೆ ತತ್ವ,ಸಿದ್ದಾಂತ)
From Wikipedia, the free encyclopedia
ಈ ಭಾವಪ್ರಧಾನತೆ ಸಿದ್ದಾಂತ ಅಥವಾ ಭಾವಪ್ರಧಾನತೆಯ ಯುಗ ವು ಒಂದು ಸಂಕೀರ್ಣ ಕಲಾತ್ಮಕ,ಸಾಹಿತ್ಯಿಕ ಮತ್ತು ಬೌದ್ದಿಕ ಚಳವಳಿಯಾಗಿ ಹುಟ್ಟಿಕೊಂಡಿತು.ಇದು 18 ನೆಯ ಶತಮಾನ ದ ದ್ವಿತಿಯಾರ್ಧದಲ್ಲಿ ಯುರೊಪ್ ನಲ್ಲಿ ತನ್ನ ಮೂಲವನ್ನು ತೋರಿಸಿತು.ಇದು ಕೈಗಾರಿಕಾ ಕ್ರಾಂತಿಗೆ ಪೂರಕವಾಗಿ ಅದರ ಜೊತೆ ಜೊತೆಯಲ್ಲಿಯೇ ತನ್ನ ಬಲ [1]ವೃದ್ಧಿಸಿಕೊಂಡಿತು. ಇದು ಶ್ರೀಮಂತ ಸಮಾಜದ ಪ್ರಭುತ್ವ ಮತ್ತು ರಾಜಕೀಯ ಲಕ್ಷಣಯುಳ್ಳ ಜ್ಞಾನಾಭಿವೃದ್ಧಿಯ ಯುಗದ ವಿರುದ್ದದ ಕ್ರಾಂತಿಯ ಭಾಗವಾಗಿ ಹುಟ್ಟಿಕೊಂಡಿತು.ಅದಲ್ಲದೇ [2]ಪ್ರಕೃತಿಯನ್ನು ವೈಜ್ಞಾನಿಕಗೊಳಿಸುವ ಕ್ರಮಕ್ಕೆ ವಿರುದ್ದವಾಗಿ ತನ್ನ ಅಭಿಪ್ರಾಯ ಮಂಡಿಸುವಲ್ಲಿ ಸಫಲತೆ ಪಡೆಯಿತು.ಹೀಗೆ ಇದು ದೃಶ್ಯ ಕಲೆ,ಸಂಗೀತ ಮತ್ತು ಸಾಹಿತ್ಯದ ಕಡೆಗೆ ತನ್ನ ಒಲವು ತೋರಿಸಿ,[3]ಚರಿತೆ ರಚನಾ ಶಾಸ್ತ್ರ,[4]ಶಿಕ್ಷಣ ಮತ್ತು [5]ನೈಸರ್ಗಿಕ ಇತಿಹಾಸದ ಮೇಲೂ ತನ್ನ ಪ್ರಭಾವ ಬೀರುವಂತೆ ಮಾಡಿತು.
ಈ ಚಳವಳಿಯು ಸೌಂದರ್ಯ ಪ್ರಜ್ಞೆಯ ಅನುಭವದ ಮೂಲವಾಗಿ ಬೆಳೆಯಿತು.ಇದು ಮನಸ್ಸಿನ ತಲ್ಲಣ,ಭಯ ಮತ್ತು ಭಯಾನಕತೆ ಮತ್ತು ವಿಸ್ಮಯಗಳ ಭಾವನಾಭೂತಿಗಳ ಮೇಲೆ ಪ್ರಭಾವ ಬೀರಿತು.ಬಹುಮುಖ್ಯವಾಗಿ ನಿಸರ್ಗದ ಭವ್ಯತೆ ಮತ್ತು ಅದರ ಅದ್ಭುತ ಚಿತ್ರಣದ ಗುಣಲಕ್ಷಣಗಳು ಪ್ರಸಕ್ತ ಸೌಂದರ್ಯಪ್ರಜ್ಞೆಯ ಉದಾಹರಣೆಗಳಾಗಿವೆ. ಇದು ಜನಪದ ಕಲೆ ಮತ್ತು ಪ್ರಾಚೀನ ಆಚರಣೆಗಳನ್ನು ಉದಾತ್ತವೆನ್ನುವಂತೆ ಚಿತ್ರಿಸಲು ಸಹಾಯ ಮಾಡಿತು.ಇದು ಅಗತ್ಯವಿರುವ ಗುಣಲಕ್ಷಣಗಳ ಬಗ್ಗೆ ಸ್ವಾಭಾವಿಕವಾಗಿ ಸಂಗೀತದ ವಿಷಯದಲ್ಲಿ ಸಮಯಸ್ಪೂರ್ತಿಯನ್ನು ಬೆಳೆಸುತ್ತದೆ.ಅದರಂತೆ "ನೈಸರ್ಗಿಕ"ವಾಗಿಯೇ ಮನುಷ್ಯನಲ್ಲಿ ಐತಿಹಾಸಿಕ ಪ್ರಜ್ಞೆಯ ತತ್ವಶಾಸ್ತ್ರದ ಹುಟ್ಟಿಗೆ ಕಾರಣವಾಗಿ ಮಾನವರಲ್ಲಿ ಭಾಷೆ ಮತ್ತು ಪದ್ದತಿ-ಆಚರಣೆಗೆ ನಾಂದಿಯಾಯಿತು.
ಭಾವಪ್ರಧಾನತೆಯ ಸಿದ್ದಾಂತವು ವೈಚಾರಿಕ ಕ್ರಾಂತಿ ಮತ್ತು ವರ್ಗೀಕರಣದ ವಿಚಾರಗಳ ಮಾದರಿಗಳ ಅಭಿವೃದ್ದಿಗೆ ಕಾರಣವಾಯಿತು.ಅದೇ ರೀತಿ ಮಧ್ಯಯುಗೀನ ತತ್ವಗಳ ಬೆಳವಣಿಗೆ ಹಾಗು ಕಾಲಕ್ಕೆ ತಕ್ಕಂತೆ ತನ್ನ ತಿರುವುಗಳನ್ನು ತರಲು ಅದಕ್ಕೆ ಸಹಾಯವಾಯಿತು.ಇದರಲ್ಲಿ ಜನಸಂಖ್ಯೆ ಹೆಚ್ಚಳ,ನಗರಿಕರಣದ ನುಸುಳುವಿಕೆ ಮತ್ತು ಕೈಗಾರಿಕಾ ಕ್ರಾಂತಿಯ ಸಿದ್ದಾಂತಗಳ ಬಿಸಿಗಳ ಮಧ್ಯೆಯೂ ಇದು ತನ್ನತನ ಕಳೆದುಕೊಳ್ಳಲಿಲ್ಲ.ಬದುಕಿನ ಶೈಲಿಯಲ್ಲಿ ಚೀನೀಕರಣ ಗೊಂಡರೂ ಅದು ತನ್ನ ಅಪರಿಚಿತತೆ ತೋರದೇ ಆ ಕಾಲದಲ್ಲಿ ಅಂತಹದೇ ನಿಯಮಗಳಿಗೆ ಅಂಟಿಕೊಳ್ಳಲಿಲ್ಲ.
ಆಧುನಿಕ ಭಾವಪ್ರಧಾನತೆಯ ಲಕ್ಷಣವನ್ನು ಪ್ರಸಿದ್ದ ಆಂಗ್ಲ ಕವಿ ಬೈರೊನ್ ನ ವಿಚಾರಗಳಲ್ಲಿ ಮಂಡಿಸಬಹುದಾಗಿದೆ.ತಪ್ಪಾಗಿ ಗ್ರಹಿಸಿದ ಏಕಾಂಗಿಯೊಬ್ಬ ತನ್ನಲ್ಲಿ ಹುಟ್ಟುವ ಸ್ಪೂರ್ತಿಯನ್ನು ಹೆಚ್ಚಾಗಿ ಪಡೆದು ಹೊರಗಿನ ಸಾಮಾಜಿಕ ವಾತಾವರಣಕ್ಕೆ ಅಷ್ಟಾಗಿ ಹೊಂದಿಕೊಳ್ಳಲಾರ.ಇದರಲ್ಲಿನ ಶಿಷ್ಟಾಚಾರ ಗಳಿಗೆ ಮತ್ತು ಸಮಕಾಲೀನ ಸಮಾಜಕ್ಕೆ ಆತ ತಲೆಕೆಡಿಸಿಕೊಳ್ಳಲಾರ.
ಆದರೂ ಈ ಚಳವಳಿಯು ಜರ್ಮನ್ ನ ಸ್ಟರ್ಮ್ ಅಂಡ್ ಡ್ರಾಂಗ್ ಚಳವಳಿಯಲ್ಲಿ ತನ್ನ ಬೇರನ್ನು ಕಂಡುಕೊಂಡಿದೆ.ಇದರಲ್ಲಿ ಜ್ಞಾನೋದಯದ ಅಂತಃಸತ್ವ ಹಾಗು ಭಾವಾತಿರೇಕದ ವೈಚಾರಿಕತೆ ಇದೆ.ಅದೇ ತೆರನಾಗಿ ಫ್ರೆಂಚ್ ಕ್ರಾಂತಿಯಲ್ಲಿಯೂ ಕೂಡಾ ಭಾವಪ್ರಧಾನತೆ ಮತ್ತು ಜ್ಞಾನೋದಯದ ಪ್ರತಿಕ್ರಿಯಾತ್ಮಕ ಕಾರ್ಯಚಟುವಟಿಕೆಗಳು ಸೇರಿವೆ. ವೇಗದ ಕೈಗಾರಿಕರಣದ ಮೇಲೂ ಭಾವಪ್ರದಾನತೆಯ ಸಿದ್ದಾಂತದ ತನ್ನ ಪ್ರಭಾವ ಬೀರಿದೆ.ಆಧುನಿಕ ಸತ್ಯಗಳ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಮನುಷ್ಯರು ರಸಾಭಿವ್ಯಕ್ತಿಯ ಭಾವನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾದರು.19 ನೆಯ ಶತಮಾನದಲ್ಲಿ ಜನರು ಈ "ವಾಸ್ತವತೆ ತತ್ವ"ದ ವಿರುದ್ದ ರಕ್ಷಣೆಗಾಗಿ ಭಾವಪ್ರಧಾನತೆಯ ತತ್ವ ಸಿದ್ದಾಂತಗಳಿಗೆ [6]ಮಾರುಹೋದರು. ಹೀಗೆ ಭಾವಪ್ರಧಾನತೆಯು ತನ್ನ ಸಾಧನೆಗಳನ್ನು ನಾಯಕನ ನೇತೃತ್ವದಲ್ಲಿ ಮಾಡುವಂತೆ ವ್ಯಕ್ತಿಗಳು ಮತ್ತು ಕಲಾವಿದರಲ್ಲಿ ಹೊಸ ಹುರುಪು ತಂದಿತು.ಅದರಂತೆಯೇ ಇಂತಹ ಪ್ರವರ್ತಕರಿಂದಾಗಿ ಸಮಾಜ ಉನ್ನತಿಯೆಡೆಗೆ ಹೋಗಲು ಸಾಧ್ಯವಾಯಿತು. ವೈಯುಕ್ತಿಕ ಕಲ್ಪನಾಶಕ್ತಿಯನ್ನು ಅದು ವಿಸ್ತಾರಗೊಳಿಸಿ ದೇಶ-ಭಾಷೆಗಳ-ಕಲೆ ಭೇದವಿಲ್ಲದೇ ವರ್ಗೀಕೃತ ಶ್ರೇಣಿಯನ್ನು ಮೀಮಾಂಸೆಗೊಳಪಡಿಸಲು ಅನುವು ಮಾಡಿತು. ಇಲ್ಲಿ ಐತಿಹಾಸಿಕ ಮತ್ತು ನೈಸರ್ಗಿಕ ಅನಿವಾರ್ಯತೆಗೆ ಇದು ಆಸರೆಯಾಯಿತು.ಅದರ ವಿಚಾರಗಳಿಗೆ ಪೂರಕವಾಗುವಂತೆ ಯುಗಧರ್ಮದ ಕಾಲಕ್ಕನುಗುಣ ವಾಗಿ ಅದರ ವೈಚಾರಿಕತೆಗೆ ತನ್ನ ಪ್ರತಿನಿಧಿತ್ವ ಸ್ಥಾಪಿತಿಸಿತು.