ಭದ್ರಾವತಿ
From Wikipedia, the free encyclopedia
ಭದ್ರಾವತಿ ಭಾರತ ದೇಶದ, ಕರ್ನಾಟಕ ರಾಜ್ಯದ, ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಕೈಗಾರಿಕಾ ಪಟ್ಟಣ. ಶಿವಮೊಗ್ಗ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. 'ಕರ್ನಾಟಕದ ಉಕ್ಕಿನ ನಗರ'ವೆಂದು ಕರೆಯಲ್ಪಡುವ ಇದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು ೨೫೫ ಕಿಲೋಮೀಟರ್ ಮತ್ತು ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ ೧೮ ಕಿಲೋಮೀಟರ್ ದೂರದಲ್ಲಿದೆ. ಈ ಪಟ್ಟಣವು ೬೭ ಚದರ ಕಿ.ಮೀ ಕ್ಷೇತ್ರಫಲ ಮತ್ತು ೨೦೦೧ ಜನಗಣತಿಯ ಪ್ರಕಾರ ೧,೬೦,೬೬೨ ಜನ ಸಂಖ್ಯೆ ಹೊಂದಿದೆ. ಇತ್ತೀಚಿನ ಚರಿತ್ರೆಯಲ್ಲಿ ಭದ್ರಾವತಿಯು ೧೯೧೮ರಲ್ಲಿ ಸ್ಥಾಪಿಸಲಾದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಹೆಸರಾಯಿತು. ಅನಂತರ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಎಂದು ನಾಮಕರಣಗೊಂಡ ಇದು ಒಂದು ದೊಡ್ಡ ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಸೌಕರ್ಯ ಹೊಂದಿದ್ದು ಭದ್ರಾವತಿಯ ಮುಖ್ಯ ಭಾಗವಾಗಿದೆ. ಕಾರ್ಖಾನೆಗಳ ಪಟ್ಟಣ ಎಂಬ ಪ್ರಖ್ಯಾತಿಯನ್ನು ಹೆಚ್ಚಿಸಿದ್ದು ೧೯೩೬ರಲ್ಲಿ ಸ್ಥಾಪಿಸಲಾದ ಮೈಸೂರು ಕಾಗದ ಕಾರ್ಖಾನೆ.
Quick Facts ಭದ್ರಾವತಿ ಬೆಂಕಿಪುರ, ವೆಂಕಿಪುರ, ವಿದ್ಯುತ್ ಜಾಲ ...
ಭದ್ರಾವತಿ
ಬೆಂಕಿಪುರ, ವೆಂಕಿಪುರ | |
---|---|
ನಗರ | |
Nickname(s): ಉಕ್ಕಿನ ನಗರ | |
ವಿದ್ಯುತ್ ಜಾಲ | ದಕ್ಷಿಣ ಜಾಲ |
ದೇಶ | ಭಾರತ |
ರಾಜ್ಯ | ಕರ್ನಾಟಕ |
ವಿಭಾಗ | ಮೈಸೂರು |
ಪ್ರದೇಶ | ಮಲೆನಾಡು |
ಜಿಲ್ಲೆ | ಶಿವಮೊಗ್ಗ |
ತಾಲ್ಲೂಕು | ಭದ್ರಾವತಿ |
ಸ್ಥಾಪಿಸಿದವರು | ಸರ್ ಎಂ ವಿಶ್ವೇಶ್ವರಯ್ಯ |
ಹೆಸರಿಡಲು ಕಾರಣ | ಉಕ್ಕಿನ ಕಾರ್ಖಾನೆ |
ಕೇಂದ್ರ ಕಛೇರಿ | ಭದ್ರಾವತಿ |
Area | |
• Total | ೬೭.೦೫೩೬ km೨ (೨೫.೮೮೯೫ sq mi) |
Elevation | ೫೯೪ m (೧,೯೪೯ ft) |
Population (೨೦೧೧) | |
• Total | ೧,೫೧,೧೦೨ |
• ಸಾಂದ್ರತೆ | ೨,೩೦೦/km೨ (೬,೦೦೦/sq mi) |
• ಪುರುಷರು | ೭೫,೦೦೯ |
• ಮಹಿಳೆಯರು | ೭೬,೦೯೩ |
ಸಮಯ ವಲಯ | ಯುಟಿಸಿ+೫:೩೦ (ಐ. ಎಸ್. ಟಿ) |
ಪಿನ್ | ೫೭೭೩೦೧, ೫೭೭೩೦೨ |
ದೂರವಾಣಿ ಕೋಡ್ | ೯೧ ೮೨೮೨ |
ವಾಹನ ನೋಂದಣಿ | ಕೆ.ಏ-೧೪ |
Close