ಪಿ. ಭಾನುಮತಿ
From Wikipedia, the free encyclopedia
ಪಾಲುವಾಯಿ ಭಾನುಮತಿ ರಾಮಕೃಷ್ಣ, (Telugu: భానుమతీ రామకృష్ణ)
(೭ ಸೆಪ್ಟೆಂಬರ್, ೧೯೨೫-೨೪ ಡಿಸೆಂಬರ್, ೨೦೦೫)
ಡಾ.ಪಿ.ಭಾನುಮತಿಯವರ, ಪ್ರತಿಭೆ ಬಹುಮುಖವಾದದ್ದು. ದಕ್ಷಿಣ ಭಾರತದ ಖ್ಯಾತ ಹಿನ್ನೆಲೆಗಾಯಕಿ, ನಟಿ, ನಿರ್ದೇಶಕಿ, ಸಂಗೀತ ನಿರ್ದೇಶಕಕಿ, ಸಂಕಲನಕಾರ್ತಿ, ಚಿತ್ರಕಥಾ ಲೇಖಕಿ, ನೃತ್ಯಪ್ರವೀಣೆ, ಭರಣಿ ಸ್ಟುಡಿಯೊದ ಮಾಲಕಿ,ತೆಲುಗಿನ ಖ್ಯಾತ ಬರಹಗಾತಿ, ಮತ್ತು ಮೇಧಾವಿಯೆಂದು ಹೆಸರಾಗಿದ್ದರು. ಶಾಸ್ತ್ರೀಯ ಸಂಗೀತದಲ್ಲೂ ಪರಿಣಿತರಾಗಿದ್ದ ಭಾನುಮತಿ ರಾಮಕೃಷ್ಣ, ಪುರಂದರದಾಸರ ೮ ಜನಪ್ರಿಯ ಕೀರ್ತನೆಗಳನ್ನು ಶಂಕರಾಭರಣ, ಕಲ್ಯಾಣಿ, ಕಾನಡ, ಕಾಂಬೋಧಿ, 'ಬೇಹಾಗ್' ಹಾಗೂ 'ಆನಂದ ಭೈರವಿ' ರಾಗಗಳಲ್ಲಿ ವೈವಿಧ್ಯಮಯವಾಗಿ ಹಾಡಿದ್ದಾರೆ. ಈ ಕೊಡುಗೆಯಿಂದ ಆ ಅಮರ ಗಾಯಕಿಯ ಕನ್ನಡ ಇನಿದನಿ ಸ್ಥಿರವಾಗಿ ಉಳಿದಿದೆ. ತಮಿಳು, ತೆಲುಗು, ಹಿಂದಿ, ಸೇರಿದಂತೆ ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದೆ, 'ಟೆಂಟ್ ಸಿನಿಮಾ' ಪ್ರಾರಂಭವಾಗುವ ಮೊದಲು, ರಂಗಭೂಮಿಯಲ್ಲಿ ನಾಟಕದ ಪರದೆ ಏಳುವಮೊದಲು, ಸಂತೆ ಮಾರುಕಟ್ಟೆಗಳಲ್ಲಿ ಹಲ್ಲುಪುಡಿ, ನಾರುಬೇರಿನ ಔಷಧಿಮಾರುವವರ ಬಳಿ ಹಾಕುತ್ತಿದ್ದ 'ಗ್ರಾಮಾಫೋನ್ ರೆಕಾರ್ಡ್' ಗಳು ಭಾನುಮತಿಯವರು ಹೇಳಿದ ಹಾಡುಗಳೇ. ಅವರು ಕನ್ನಡದಲ್ಲಿ ೧೯೫೭ ರಲ್ಲಿ ತೆರೆಕಂಡ 'ಕೆಂಪರಾಜ್ ಪ್ರೊಡಕ್ಷನ್' ರವರ 'ನಳದಮಯಂತಿ' ಚಿತ್ರದಲ್ಲಿ ಮಾತ್ರ ಅಭಿನಯಿಸಿದ್ದು. ಆದರೆ, ೧೯೪೩ ರಲ್ಲಿ, 'ಎಂ.ವಿ.ರಾಜಮ್ಮ' ನಿರ್ಮಿಸಿದ ರಾಧಾರಮಣ, ಚಿತ್ರದಲ್ಲಿ ಒಂದು ಚಿಕ್ಕಪಾತ್ರದಲ್ಲಿ ಅಭಿನಯಿಸಿದ್ದರು.