ದುಂಡು ಮೇಜಿನ ಸಭೆ(ಭಾರತ)
From Wikipedia, the free encyclopedia
ಈ ಲೇಖನವು ಆಂಗ್ಲೋ-ಭಾರತೀಯರ ದುಂಡು ಮೇಜಿನ ಸಭೆಯನ್ನು ಕುರಿತದ್ದಾಗಿದೆ. ಡಚ್-ಇಂಡೋನೇಷ್ಯನ್ ದುಂಡು ಮೇಜಿನ ಸಭೆಗಾಗಿ ಡಚ್-ಇಂಡೋನೇಷ್ಯನ್ ದುಂಡು ಮೇಜಿನ ಸಭೆಯನ್ನು ನೋಡಿ. ದುಂಡು ಮೇಜಿನ ಇತರ ಉಪಯೋಗಕ್ಕಾಗಿ,ದುಂಡು ಮೇಜನ್ನು ನೋಡಿ(ಅಸ್ಪಷ್ಟತೆಯ ನಿವಾರಣೆ).
೧೯೩೦-೩೨ ರ ಮೂರು ದುಂಡು ಮೇಜಿನ ಸಭೆ ಯು, ಭಾರತದಲ್ಲಿ ಸಂವಿಧಾನಾತ್ಮಕ ತಿದ್ದುಪಡಿಗಳನ್ನು ಚರ್ಚಿಸಲು ಬ್ರಿಟಿಷ್ ಸರ್ಕಾರ ಏರ್ಪಡಿಸಿದಂತಹ ಸಮಾಲೋಚನೆಗಳ ಸರಣಿಯಾಗಿದೆ. ೧೯೩೦ ರ ಮೇ ಯಲ್ಲಿ ಸೈಮನ್ ಆಯೋಗ ಮಂಡಿಸಿದಂತಹ ವರದಿಯ ಶಿಫಾರಸ್ಸಿನಿಂದಾಗಿ ಇವುಗಳನ್ನು ನಡೆಸಲಾಗಿತ್ತು. ಭಾರತದಲ್ಲಿ ಸ್ವರಾಜ್ ಅಥವಾ ಸ್ವಯಂ-ಆಡಳಿತಕ್ಕೆ ಬೇಡಿಕೆಯು ದಿನದಿಂದ ದಿನಕ್ಕೆ ಪ್ರಬಲವಾಗತೊಡಗಿತ್ತು. ೧೯೩೦ರ ಹೊತ್ತಿಗೆ, ಭಾರತ ಸ್ವತಂತ್ರ ರಾಷ್ಟ್ರ ಸ್ಥಾನಮಾನವನ್ನು ಗಳಿಸುವ ಕಡೆಗೆ ಸಾಗಬೇಕಾದ ಅಗತ್ಯವಿದೆ ಎಂದು ಅನೇಕ ಬ್ರಿಟಿಷ್ ರಾಜಕಾರಣಿಗಳು ನಂಬಿದ್ದರು. ಅದೇನೇ ಆದರೂ ಭಾರತೀಯ ಮತ್ತು ಬ್ರಿಟಿಷ್ ರಾಜಕೀಯ ಪಕ್ಷಗಳ ನಡುವೆ ಸಭೆಯು ಪರಿಹರಿಸದಂತಹ ಅನೇಕ ಗಮನಾರ್ಹ ಭಿನ್ನಾಭಿಪ್ರಾಯಗಳಿದ್ದವು.