ದಿವಾನ್ ಪೂರ್ಣಯ್ಯ
ಹೈದರ್ ಅಲಿ, ಟಿಪ್ಪು ಸುಲ್ತಾನ್, ಬ್ರಿಟಿಷ್ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ಮೈಸೂರು ರಾಜ / From Wikipedia, the free encyclopedia
ಪೂರ್ಣಯ್ಯ, ಕೃಷ್ಣಮಾಚಾರ್ಯ ಪೂರ್ಣಯ್ಯ|ಮಿರ್ ಮಿರಾನ್ ಪೂರ್ಣಯ್ಯ, (೧೭೪೬-೨೭ಮಾರ್ಚ್ ೧೮೧೨) ನೆಂದು ಸಾರ್ವಜನಿಕರಿಗೆ ಮತ್ತು ಉನ್ನತ ವರ್ಗದ ಅಧಿಕಾರಿಗೆಳಿಗೆ ಪರಿಚಿತರಾಗಿದ್ದ ಅವರು ಮೈಸೂರು ಸಂಸ್ಥಾನದ ಮೊಟ್ಟಮೊದಲ [1] ದಿವಾನರಾಗಿದ್ದರು. [2] ಮೈಸೂರಿನ ದಿವಾನರುಗಳಲ್ಲಿ ಪ್ರಮುಖರು.[3] ಮೇಧಾವಿ, ದಕ್ಷ ಆಡಳಿತಗಾರ, ಮತ್ತು ಜನಪರ ಕಾರ್ಯಕ್ರಮಗಳಿಗೆ ಹೆಸರಾದವರು. ಮೊದಲು ಹೈದರಾಲಿಯ ನಂಬಿಕೆಯ ವ್ಯಕ್ತಿಯಾಗಿ ದಿವಾನಿಕೆ ಕಾರ್ಯವನ್ನು ನಿರ್ವಹಿಸಿ ಮುಂದೆ ಟಿಪ್ಪೂಸುಲ್ತಾನ್ ಬಳಿಯೂ ದಿವಾನರಾಗಿದ್ದರು. ಬಾಲಕ, 'ಮುಮ್ಮಡಿ ಕೃಷ್ಣರಾಜ ಒಡೆಯರ್' ಮೈಸೂರಿನ ದೊರೆಯಾಗಿ ನಿಯುಕ್ತರಾದಮೇಲೆ ಪೂರ್ಣಯ್ಯನವರು, ಯುವರಾಜನಿಗೆ ರಾಜ್ಯದ ಸಮಸ್ತ ಆಡಳಿತದ ಜವಾಬ್ದಾರಿಗಳ ಬಗ್ಗೆ ಸಮರ್ಪಕವಾದ ತರಬೇತಿ ನೀಡಿದರು. [4]